Surprise Me!

News Cafe | ಸಿಲಿಕಾನ್ ಸಿಟಿಯಲ್ಲಿ ಸಮಸ್ಯೆಗಳ ಸರಮಾಲೆ | Sep 1, 2022

2022-09-01 1 Dailymotion

ಇದು ಬ್ರ್ಯಾಂಡ್ ಬೆಂಗಳೂರು ವರ್ಸಸ್ ಗುಂಡಿ ಬೆಂಗಳೂರು ಸುದ್ದಿ.. ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗ್ತಿದೆ. ಬೆಂಗಳೂರು ಗುಂಡಿಗಳ ಬಗ್ಗೆ ಎರಡ್ಮೂರು ತಿಂಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಶ್ರೀಸಾಮಾನ್ಯನಿಂದ ಹಿಡಿದು ವಿವಿಧ ಉದ್ಯಮಿಗಳು ಬೆಂಗಳೂರು ಗುಂಡಿ, ಮೂಲಭೂತ ಸೌಕರ್ಯದ ಬಗ್ಗೆ ಕಿಡಿಕಾರಿದ್ರು. ಬೆಂಗಳೂರು ಗುಂಡಿ ಗಂಡಾಂತರದ ಬಗ್ಗೆ ವರದಿ ಮತ್ತೆ ಪ್ರಧಾನಿ ಕಚೇರಿ ತಲುಪಿದೆ. ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್ ಬೆನ್ನಲ್ಲೇ ಪ್ರಧಾನಿ ಕಚೇರಿ ಮಾಹಿತಿ ಪಡೆದುಕೊಂಡಿದೆ. ಬೆಂಗಳೂರಿನ ರಸ್ತೆಗಳನ್ನ ಸರಿಪಡಿಸಲು ಮೀನಾಮೇಷ, ಮಳೆಯ ನೆಪ, ಸ್ಮಾರ್ಟ್‍ಸಿಟಿ ನೆಪ, ಗ್ಯಾಸ್‍ಲೈನ್ ನೆಪ, ಬೆಂಗಳೂರು ಮಿಷನ್ ಎಂದು ಘೋಷಿಸಿ ಮೂಲಭೂತ ಸೌಕರ್ಯಗಳನ್ನೇ ನೀಡದಿರೋದು, ಮಳೆಯಾದ್ರೆ ಬೆಂಗಳೂರು ಮುಳುಗುತ್ತಿರೋದು ಯಾಕೆ ಹೀಗೆ ಇಡೀ ಬೆಂಗಳೂರಿನ ಚಿತ್ರಣದ ಬಗ್ಗೆ ಕಂಪ್ಲೀಟ್ ವರದಿಯನ್ನು ಪ್ರಧಾನಿ ಕಚೇರಿ ಪಡೆದುಕೊಂಡಿದೆ. ಸಿಎಂ ಬೊಮ್ಮಾಯಿ ನಿರ್ಲಕ್ಷ್ಯಕ್ಕೆ ಪ್ರಧಾನಿ ಮೋದಿ ಚೆನ್ನಾಗಿಯೇ ಮದ್ದು ಅರೆಯುತ್ತಾರೆ. ಬ್ರ್ಯಾಂಡ್ ಬೆಂಗಳೂರು ಗುಂಡಿ ಬೆಂಗಳೂರನ್ನಾಗಿ ಮಾಡಿರುವ ಬೊಮ್ಮಾಯಿ ಸರ್ಕಾರಕ್ಕೆ ಪ್ರಧಾನಿ ಮೋದಿ ಸಖತ್ ಕ್ಲಾಸ್ ತೆಗೆದುಕೊಳ್ಳೋದು ಪಕ್ಕಾ ಅನ್ನೋ ಮಾತುಗಳು ಕೇಳಿಬರ್ತಿದೆ.

#publictv #newscafe #bengaluru